Skip to main content

Posts

Featured

Kailash Manasa Sarovar Yatra | ಕೈಲಾಸ್ ಮಾನಸ ಸರೋವರ ಮತ್ತು ಮುಕ್ತಿನಾಥ ಯಾತ್ರಾ

ಕೈಲಾಸ್ ಮಾನಸ ಸರೋವರ ಮತ್ತು  ಮುಕ್ತಿನಾಥ  ಯಾತ್ರಾ : ದಿನಾಂಕ 1 2/06/2018: ಬೆಂಗಳೂರಿನ ಶಂಕರ್ ಟ್ರೆಕ್ಸ್   ಮುಖಾಂತರ  ಕೈಲಾಸ್ ಮಾನಸ ಸರೋವರ್ ಯಾತ್ರೆಗೆ ಹೋಗಬೇಕಂದು ಕೊಂಡಾಗಲೇ ಒಂದು ಅನಿರ್ವಚನೀಯ ಸಂತೋಷ  ಹಾಗು  ರೋಮಾಂಚನ. ಪ್ರತಿಯೊಬ್ಬರಿಗೂ ಈ ಯಾತ್ರೆ  ತಮ್ಮ ಜೀವನದ ಸುಂದರ  ಕನಸು  ಹಾಗು ಹೆಬ್ಬಯಕೆ. ಭಕ್ತಿಭಾವದಿಂದ ಪುಳಕಿತರಾಗುತ್ತೇವೆ.  ತಂದೆ-  ತಾಯಿಯರನ್ನು, ಗುರು  ಹಿರಿಯರನ್ನು  ಮನದಲ್ಲಿ ನೆನೆದು , ನಮಸ್ಕರಿಸಿ , ಮನೆ ದೇವರನ್ನು ಸ್ಮರಿಸಿ ಈ ಯಾತ್ರೆಯನ್ನು ಪೂರೈಸುವ  ಶಕ್ತಿಯನ್ನು ಕರುಣಿಸೆಂದು ಬೇಡುತ್ತ ನಮ್ಮ ಪಯಣವನ್ನು ದಿನಾಂಕ 12/06/2018ರಂದು    ಪ್ರಾರಂಬಿಸಿದೆವು        ಈ ಯಾತ್ರೆಗೂ ಮೊದಲು    ಶಂಕರ್ ಟ್ರೆಕ್ಸ್ ನವರು  ಯಾತ್ರೆಯ ಕಠಿಣತೆಯ ಬಗ್ಗೆ ಸಂಭಾವ್ಯ ಆಗುಹೋಗುಗಳ ಬಗ್ಗೆ  ಎಲ್ಲ   ವಿವರಗಳನ್ನು  ಒಂದು ಸಭೆ ಏರ್ಪಡಿಸಿ  ವಿವರಿಸಿ ನಮ್ಮನ್ನು ಈ  ಯಾತ್ರೆಗೆ ಸಜ್ಜು ಮಾಡಿದ್ದರು.  ಯಾತ್ರೆಯ ಬಗ್ಗೆ ತಿಳಿದಾಗ ಭಯ ಮಿಶ್ರಿತ ರೋಮಾಂಚನ. ಏಕೆಂದರೆ ದುರ್ಗಮ ದಾರಿ, ಹವಾಮಾನದ ವೈಪರೀತ್ಯತೆ, ಸುಮಾರು 16000 ಅಡಿಗಳಿಗೂ  ಎತ್ತರದ ಪ್ರದೇಶಗಳಲ್ಲಿ ...

Latest Posts