ಕುಲದೇವರ ಸನ್ನಿಧಿಗೆ ಕುಟುಂಬ ಯಾತ್ರೆ
|| ಶ್ರೀ ಮೈಲಾರ ಲಿಂಗೇಶ್ವರ ಪ್ರಸನ್ನ || || ಶ್ರೀ ಲಕ್ಷ್ಮೀ ಚಂದ್ರಲಾ ಪರಮೇಶ್ವರಿ ಪ್ರಸನ್ನ || 4.12.25 ರಂದು ಸಾಯಂಕಾಲ ಕುಲಕರ್ಣಿ ಕುಟುಂಬದ ನಾವು ಕೆಲವು ಸದಸ್ಯರು,ಮೊದಲೇ ಕಾದಿರಿಸಿದ್ದ 7.15ರ ಬೆಂಗಳೂರು ಬೀದರ್ ಎಕ್ಸ್ಪ್ರೆಸ್ ರೈಲಿನಿಂದ ಹೊರಟು ಬೆಳಿಗ್ಗೆ 5.11.25 ರ ಬೆಳಿಗ್ಗೆ ಮೂರು ಗಂಟೆಗೆ ಯಾದಗಿರಿ ತಲುಪಿ, ಅಲ್ಲಿಂದ ಕಾರಿನಲ್ಲಿ ಯರಗೋಳು ಉತ್ತರಾಧಿ ಮಠಕ್ಕೆ ಬೆಳಿಗ್ಗೆ ನಾಲ್ಕು ಗಂಟೆಗೆ ತಲುಪಿ, ಸ್ನಾನ ಮಾಡಿ ಮೈಲಾರಲಿಂಗನ ಸನ್ನಿದಿಗೆ ಹೊರಟೆವು. ಸುಮಾರು ಒಂದೂವರೆ ಗಂಟೆ ಪ್ರಯಾಣಿಸಿ, ಅಲ್ಲಿ ನಮ್ಮ ಕುಲದೇವರಾದ ಮೈಲಾರ ಲಿಂಗನ ಪೂಜೆ ಕೈಗೊಂಡು, ಹನ್ನಂದೂ ವರೆಗೆ ಮರಳಿ ಯಾರಗೋಳದ ಉತ್ತರಾಧಿ ಮಠಕ್ಕೆ ಹನ್ನೆರಡು ಇಪ್ಪತ್ತಕ್ಕೆ ತಲುಪಿದೆವು. ಮೈಲಾರ ಲಿಂಗನ ಸನ್ನಿಧಿಯು ಮೊದಲಿಗಿಂತ ಅಭಿವೃದ್ಧಿ ಹೊಂದಿದರೂ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದರೆ, ಒಳ್ಳೆಯ ಯಾತ್ರಾಸ್ಥಳ ಆಗುವುದರಲ್ಲಿ ಸಂದೇಹವಿಲ್ಲ. ಅಲ್ಲಿಯ ಹೊನ್ನಕೆರೆ, (ಅಲ್ಲಿ ಹಿಂದೆ ಹೊನ್ನು ಸಿಕ್ಕಿದ್ದರಿಂದ ಆ ಹೆಸರು) ತುಂಬಿ ಹರಿಯುತ್ತಿದ್ದು, ನಾವೆಲ್ಲರೂ ನೀರಿನಲ್ಲಿ ಸ್ವಲ್ಪ ಆನಂದಿಸಿದೆವು. ಅಲ್ಲಿ ನಮ್ಮ ಮ...